ಯುಕ್ತಿ ನಡೆಯದೊ !
ಭಕ್ತಿಯೊಳ್ ಸ್ಮರಿಸಿಬಿಡು ರಾಮರಾಮಾ ಎಂದು
ಶಕ್ತಿಯಿದೆ ಕುಣಿಯೇಳು ಮೈಮರೆತು ನಿಂದು
ಭಕ್ತಿ ಮೂಡುವ ಕಾಲಕಿಲ್ಲವಾದರೆ ಶಕ್ತಿ
ಯುಕ್ತಿ ನಡೆಯದೊ ತಿಳಿಯೊ ಜಾಣಮೂರ್ಖ//
ತನ್ಮಯನಾಗಿ ಶ್ರೀರಾಮನನ್ನು ಭಜಿಸುವ ಕಾಲದಲ್ಲಿ ಮೈಮರೆತು ರಾಮ ಭಜನೆಯಲ್ಲಿ ಲೀನವಾಗಿಬಿಡಬೇಕು. ಶಕ್ತಿಯಿದ್ದರೆ ಕುಣಿ ಕುಣಿದು ಭಜಿಸಬೇಕು. ಏಕೆಂದರೆ ಭಜಿಸುವ ಸಂದರ್ಭಗಳು ಎಲ್ಲಾ ಕಾಲದಲ್ಲೂ ಸಿಗದು. ಒಂದು ವೇಳೆ ಸಿಕ್ಕರೂ ಭಜಿಸುವ ಭಾವವಾಗಲಿ , ಕುಣಿದು ಪಾಡುವ ಶಕ್ತಿಯಾಗಲಿ ಇರದೆ ಹೋಗಬಹುದು. ಆದುದರಿಂದ ಅವಕಾಶ ಸಿಕ್ಕದಾಗ ಭಜಿಸಿಬೇಕು. ನಿಶ್ಚಲ ಸ್ಮರಣೆಯ ಆನಂದವನ್ನು ಅನುಭವಿಸಬೇಕು. ಹಾಂ ! ಇನ್ನೊಂದು ವಿಷಯ. ಭಕ್ತಿಯೆಂಬುದನ್ನು ಯುಕ್ತಿಯ ತಂತ್ರಗಳ ಮುಖವಾಡ ಹಾಕಿ ತೋರಿಸಲಾಗದು. ಈ ಎಲ್ಲಾ ಯುಕ್ತಿವಿಶೇಷಗಳು ಮಾನವರ ಮುಂದೆ ನಡೆಯಬಹುದೇನೋ. ಆದರೆ ಭಗವಂತನ ಮುಂದೆ ನಡೆಯಲಾರವು. ಅಲ್ಲವೇ ಗೆಳೆಯರೇ !?
Latest posts by ಶ್ರೀ ಮುರಳೀಧರ ಹೆಚ್ ಆರ್ (see all)
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021