ಭಾವದಾಸ್ಯತ್ವ
ದೇವನೆದಿರೆಂತದಿದು ದೇಹದಾಸ್ಯತ್ವ ಬಿಡು
ಕಾವ ದೇವನಿಗೆಂತ ಮನದ ದಾಸ್ಯತ್ವ ?
ದೇಹಭಾವವ ತೊರೆದು ಭಾಷ್ಪದಿಂ ಕರೆಯವನ
ಭಾವದಾಸ್ಯತ್ವ ಪಿಡಿ ಜಾಣಮೂರ್ಖ//
ದೇವನೆದಿರು ದಾಸ್ಯತ್ವವು ದೇಹದಿಂದ ತೋರಿಸಲ್ಪಡಬಾರದು. ತುಂಬಾ ಯಾಂತ್ರಿಕ ಮತ್ತೆ ಬಾಲಿಶ ಎನಿಸಿಬಿಡುತ್ತದೆ. ಇನ್ನು ಮನದ ದಾಸ್ಯತ್ವ ಮೋಹದಿಂದ ಕೂಡಿದ್ದು ಬಲು ಅಪಾಯಕಾರಿ. ಭಗವಂತನನ್ನು ಕರೆವಾಗ ದೇಹಭಾವವನ್ನು ತೊರೆದು , ಆನಂದದ ಕಣ್ಣೀರಿನೊಡನೆ ಭಾವತುಂಬಿ ಕರೆಯಬೇಕು. ಅದು ಭಾವದಾಸ್ಯತ್ವ. ಇದನ್ನೇ ದೇವನು ಬಯಸೋದು. ಇನ್ನೇನೇ ಇದ್ದರೂ ಅದು ಬರಿಯ ನಾಟಕವಷ್ಟೆ. ಅದೇ ನಿಜವಾದ ದಾಸ್ಯತ್ವ.
Latest posts by ಶ್ರೀ ಮುರಳೀಧರ ಹೆಚ್ ಆರ್ (see all)
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021