ವಿಷಯಗಳಿಗೆಳೆಸುವವ
ತವಸಿಯೆಂತಾಗುವನು ?
ತವಸಿ ತಾ ವಿಷಯಗಳಿ
ಗೆಳೆಸುವನೆ ಕೆಳೆಯ ?!
ಸುರರರಸುವಿರಲಿ ವರ
ಕೌಶಿಕನೆ ಸೋತಿರಲು
ಡಂಭ ವೈರಾಗ್ಯ ಬಿಡು
ಜಾಣಮೂರ್ಖ //
ವಿಷಯಾಸಕ್ತಿ , ಲೌಕಿಕ ಭೋಗ ಭಾಗ್ಯಂಗಳ ಬಲೆಯಲ್ಲಿ ಸಿಲುಕಿದವನು ಋಷಿಯಾಗಲೆಂತು ಸಾಧ್ಯ ? ಋಷಿ ಎಂದರೆ ಗಡ್ಡಮೀಸೆಗಳನ್ನು ಬಿಟ್ಟು , ಕಾಡಿಗೆ ತೆರಳಿ , ತಪಸ್ಸನ್ನಾಚರಿಸುವವನು ಎಂದಲ್ಲ. ಲೌಕಿಕ ಬದುಕಿನಲ್ಲದ್ದುಕೊಂಡೇ ವಿಶೇಷವಾದುದನ್ನು ಸಾಧಿಸುವವನೇ ಸಾಧಕನು. ಅವನ ಸಾಧನೆಯು ಓರ್ವ ಋಷಿಯ ಸಾಧನೆಯೇ ಆಗಿರುತ್ತದೆ. ಅಂತಹಾ ಋಷಿಸಮಾನನು ಎಂದಿಗೂ ವಿಷಯಾದಿಗಳ ಪಾಶಕ್ಕೆ ಬಂಧಿಯಾಗಲಾರ. ಆದರೆ ಆ ಸಾಧನೆ ಬಹು ಕಷ್ಟ. ಸುರರ ಅರಸುವಾದ ದೇವೇಂದ್ರನೂ ಅಂತೆಯೇ ಬ್ರಹ್ಮರ್ಷಿ ವಿಶ್ವಾಮಿತ್ರರಂತಹವರೂ ಸಹ ಮಾಯಾಪಾಶಕ್ಕೆ ಬಲಿಯಾದವರೇ ಅಲ್ಲವೇ ? ಇಂತಹ ಮಹೋನ್ನತ ಸಾಧಕರ ನಡುವೆ ವೈರಾಗ್ಯದ ಡಂಭ ತೋರುವವರನ್ನು ನೋಡಿದರೆ ನಗು ಬರದೇ ಇರುತ್ತದೆಯೇ ? ನಿಜವಾದ ಅಂತರಂಗ ಸಾಧಕರು ಜಗತ್ತನ್ನು ಕಂಡು ಮನದಲ್ಲೇ ನಕ್ಕು ಸುಮ್ಮನಾಗುತ್ತರಷ್ಟೆ !
Latest posts by ಶ್ರೀ ಮುರಳೀಧರ ಹೆಚ್ ಆರ್ (see all)
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021