Write to us : Contact.kshana@gmail.com

*ಶ್ರೇಷ್ಠತ್ವದ ದಾರಿ*

0
(0)

ಸುಖದೊಳೊಂದಾಗುತಲಿ
ಕಷ್ಟದೊಳು ದೂರಾಗಿ
ನಿಷ್ಠನಂದದೊಳೊಪ್ಪೆ
ಶಿಷ್ಠನಾದೀಯೇಂ ?
ಸುಖದೊಳಿರದಿರಲೇನು?
ಕಷ್ಟದೊಳಗೊಂದಾಗು
ಶ್ರೇಷ್ಟತ್ವಕಿದೆ ದಾರಿ
ಜಾಣಮೂರ್ಖ //

ಓ, ಗೆಳೆಯಾ ! ಒಬ್ಬರ ಸುಖದಲ್ಲಿ ಒಂದಾಗಿರುವುದು ದೊಡ್ಡದಲ್ಲ, ಘನವೂ ಅಲ್ಲ. ಕಷ್ಟಕಾಲದಲ್ಲಿ ಜೊತೆಯಿರುವುದಿದೆಯಲ್ಲಾ ! ಅದು ನಿಜವಾದ ಘನತೆ. ಕಷ್ಟದಲ್ಲಿ ದೂರವಿದ್ದು , ಪಲಾಯನವಾದಿಯಾಗಿ ಆಮೇಲೆ ನಿಷ್ಠನ ರೀತಿ ಮಾತನಾಡುವುದು ತರವೇ ? ಇದನ್ನು ನಿಷ್ಠತೆ ಎನ್ನಲಾದೀತೆ ? ದುರಂತವೆಂದರೆ ಇಂದು ಜಗತ್ತಿನಲ್ಲಿ ಇಂತಹವರೇ ತುಂಬಿದ್ದಾರೆ. ಬರೀ ನಿಷ್ಠತೆಯ ಮುಖವಾಡಗಳೇ ಕಾಣುತ್ತಿವೆ. ಮುಖವಾಡ ಕಳಚಿದರೆ ಬಣ್ಣ ಬಯಲಾಗುತ್ತದೆ. ಹೀಗೆ ಮುಖವಾಡ ಹಾಕಿ ಬದುಕಿದರೆ ಲೌಕಿಕ ಬದುಕಿನಲ್ಲಿ ಕ್ಷಣಿಕವೂ , ಮಿಥ್ಯವೂ ಆದ ಬಣ್ಣ ಬಣ್ಣದ ಸಾಧನೆಗಳಾಗಬಹುದೇನೋ ! ಆದರೆ ಮರೆಯದಿರು, ಮೇಲೊಬ್ಬನಿದ್ದಾನೆ ! ಅವನೆಲ್ಲವನ್ನೂ ನೋಡುತ್ತಿದ್ದಾನೆ. ಸ್ವಾರ್ಥ ಬಿಡು. ಮರೆಯದಿರು ನಿನ್ನ ಹೆಜ್ಜೆಯ ಗುರುತುಗಳನ್ನು! ಹಣಸಂಪಾದನೆಯೊಂದೇ ಗುರಿಯಲ್ಲ. ನಿನ್ನವರ ಕಷ್ಟದೊಳಗೊಂದಾಗು ಇದೇ ಶ್ರೇಷ್ಠತ್ವದ ದಾರಿ. ಸುಖದಲ್ಲಿ ಭಾಗಿಯಾಗದಿದ್ದರೂ ಚಿಂತೆಯಿಲ್ಲ. ಕಷ್ಟಕಾಲದಲ್ಲಿ ನೆರವಿಗೆ ನಿಲ್ಲಬೇಕು. ಇದು ನಿಜವಾದ ಮಾನವಧರ್ಮ ಅಲ್ಲವೇ ಗೆಳೆಯರೇ !?

How do you like this post?

Click on a star to rate it!

Average rating 0 / 5. Vote count: 0

No votes so far! Be the first to rate this post.

We are sorry that this post was not useful for you!

Let us improve this post!

Tell us how we can improve this post?

ಶ್ರೀ ಮುರಳೀಧರ ಹೆಚ್ ಆರ್
Latest posts by ಶ್ರೀ ಮುರಳೀಧರ ಹೆಚ್ ಆರ್ (see all)

Subscribe to Blog via Email

Enter your email address to subscribe to this blog and receive notifications of new posts by email.

Join 1 other subscriber
More Stories
ತಪ್ಪನಾಚರಿಸದಿರು