ಜನನ ಮರಣದ ಮದ್ದು
ಜಗದ ರೋಗಂಗಳಿಗೆ ಮದ್ದಿಹುದು ದಿಟದಿ ಕೇ
ಳ್ಮಿಗೆ ಜನನ ಮರಣಕ್ಕೆ ಮದ್ದಾವುದಿಹುದು ?
ಯುಗಯುಗಗಳಿಂ ಬಿಡದ ಮಾಯೆಯೊಳ್ಬೀಳದಿರು
ಮಿಗೆಯರಿವೆ ಮದ್ದುಗಾಣ್ ಜಾಣಮೂರ್ಖ//
ಈ ಜಗತ್ತಿನಲ್ಲಿ ಯಾವ ರೋಗವೇ ಬರಲಿ ಅದಕ್ಕೆ ಏನಾದರೊಂದು ಮದ್ದು ಇದ್ದೇ ಇರುವುದು. ಆದರೆ ಈ ಜನನ ಮರಣಂಗಳಿಗೆ ಮದ್ದಿಹುದೇನು? ಹುಟ್ಟುವುದು ! ಹುಟ್ಟಿದ ಮೇಲೆ ನಾನಾ ಕಷ್ಟ ಪರಂಪರೆಗಳಿಗೆ ಈಡಾಗುವುದು, ಬಿಡುಗಡೆಗೆ ಹೇತುವಾದ ನಾಮಜಪವನ್ನು ಬಿಟ್ಟು ಮಾಯೆಯ ಗುಂಗಿನಲ್ಲೇ ಮರಣಿಸುವುದು. ಇದೇ ಆಯಿತು ಯುಗಯುಗಗಳಿಂದಲೂ ! ಜನನ ಮರಣದ ಸಂಕೋಲೆಯಿಂದ ಬಿಡುಗಡೆಯಂತೂ ಸಿಗಲಿಲ್ಲ. ಇದ್ದಕ್ಕೆ ಮದ್ದೆಂದರೆ ಶ್ರೇಷ್ಠವಾದ ಅರಿವು . ಈ ಅರಿವಿನಿಂದ ಜನನ ಮರಣದ ಮಿತಿಯನ್ನು ಮೀರಿ ನಿಜವಾಗಿ ನಾನು ಯಾರು ? ಏಕೆ ಬಂದಿದ್ದೇನೆ ಇಲ್ಲಿ? ನನ್ನ ಕರ್ತವ್ಯವೇನಿಲ್ಲಿ? ಇವೇ ಮೊದಲಾದ ಪ್ರಶ್ನೆಗಳಿಗೆ ಉತ್ತರವನ್ನು ಕಂಡುಕೊಂಡು ಅರಿವಿನ ಮೇರುವಾಗುವುದೇ ಮದ್ದು. ಅಲ್ಲವೇ ಗೆಳೆಯರೇ !
Latest posts by ಶ್ರೀ ಮುರಳೀಧರ ಹೆಚ್ ಆರ್ (see all)
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021