ಬಾಳಿನೊರೆಗಲ್ಲುಗಳು
ಮುಕ್ತನಾಗಲ್ಕಿಹವು ಜಗದ ಸಂಕಷ್ಟಗಳು
ಶಕ್ತನಾಗಂತರಂಗವನು ಅನುಗೊಳಿಸಿ
ಯುಕ್ತಿಯೊಳಗಾಂತರ್ಯವೊರೆವ ಒರೆಗಲ್ಗಳನು
ಭಕ್ತಿಶಕ್ತಿಯೊಳಾಳೊ ಜಾಣಮೂರ್ಖ//
ಈ ಜಗತ್ತಿನಲ್ಲಿ ನಾವು ಅನುಭವಿಸೋ ಕಷ್ಟಗಳೆಲ್ಲವೂ ನಮ್ಮನ್ನು ಪರೀಕ್ಷಿಸಲೆಂದೇ ಬರುತ್ತವೆ. ಅವುಗಳನ್ನು ಎದುರಿಸಲು ನಾವು ಶಕ್ತರಾಗಬೇಕು. ಆ ಸಂಕಷ್ಟಗಳನ್ನೆಲ್ಲಾ ನಾವು ನಮ್ಮ ಅಂತರಂಗವನ್ನು ಒರೆಗೆ ಹಚ್ಚಲಿಕ್ಕಾಗಿ ಬಂದಿರೋ ಒರೆಗಲ್ಲುಗಳೆಂದೇ ಭಾವಿಸಬೇಕು. ಗುರುವಿನಲ್ಲಿ , ದೈವದಲ್ಲಿ ಭಕ್ತಿ ಇದ್ದಾಗ ನಮಗೆ ವಿಶೇಷವಾದ ಶಕ್ತಿ ಪ್ರಾಪ್ತವಾಗಿ ಆ ಪರೀಕ್ಷೆಯನ್ನೆದುರಿಸುವ ಶಕ್ತಿ ತಾನೇ ತಾನಾಗಿ ಪ್ರಾಪ್ತವಾಗುತ್ತದೆ. ಆತ್ಮವಿಶ್ವಾಸ ಮೂಡುತ್ತದೆ. ಗೆಳೆಯರೇ ಬನ್ನಿ ನಮ್ಮಂತರಂಗವನ್ನು ಜಾಗೃತಗೊಳಿಸಿಕೊಂಡು ಮುನ್ನಡೆಯೋಣ.
Latest posts by ಶ್ರೀ ಮುರಳೀಧರ ಹೆಚ್ ಆರ್ (see all)
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021