ವಸುಧೆಗಿದೆ ದೈವತ್ವ
ಹಸನುಗೊಳಿಸದೆ ನೆಲನ ವಿತ್ತ ಬಿತ್ತುವರೇನು?
ಕಸುವೀಯದಲೆ ವಿತ್ತ ಬಿತ್ತೆ ಫಲವೇನು?
ಜಸವು ಎದೆನೆಲದಿ ಸದ್ಭಾವ ಬಿತ್ತನು ಬಿತ್ತೆ
ವಸುಧೆಗದೆ ದೈವತ್ವ ಜಾಣಮೂರ್ಖ//
ಭೂಮಿಯನ್ನು ಹಸನುಗೊಳಿಸದೆ ಬಿತ್ತನೆ ಮಾಡುವರೇನು ? ನೆಲವನ್ನು ಶುದ್ಧಿಮಾಡಿ ನೀರು ಗೊಬ್ಬರಗಳಿಂದ ಕಸುವು ಕೊಡಬೇಕು. ಆಗ ಮೊಳೆವಿತ್ತ ಬಿತ್ತಿದರೆ ನಿಕ್ಕಿಬೆಳೆ ಬರುತ್ತದೆ. ಹಾಗೇ ಹೃದಯವೆಂಬ ನೆಲವನ್ನು ಸ್ವಚ್ಛಗೊಳಿಸಬೇಕು. ಅನಗತ್ಯ ಕಳೆಗಳನ್ನು ಕಳೆದು ಸದ್ಭಾವ , ಉತ್ತಮ ಸಂಸ್ಕಾರವೆಂಬ ಬಿತ್ತನ್ನು ಬಿತ್ತಬೇಕು. ಆ ಬೆಳೆ ಹುಲುಸಾಗಿ ಬಂತೆಂದರೆ ಹೃದಯವೆಂಬ ಇಳೆ ದೈವತ್ವದ ನೆಲೆಯಾಗುತ್ತದೆ. ಅಂತಹಾ ದಿವ್ಯಾತ್ಮರುಗಳು ಕಾಲಚಕ್ರವನ್ನು ಸುಲಭವಾಗಿ ದಾಟುತ್ತಾರೆ. ಭೂತಾಯಿಯೂ ದನ್ಯಳಾಗುತ್ತಾಳೆ. ಅಲ್ಲವೇ ಗೆಳೆಯರೇ ?
Latest posts by ಶ್ರೀ ಮುರಳೀಧರ ಹೆಚ್ ಆರ್ (see all)
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021