ಬಯಸಿದುದ ಪಡೆವೆಯೈ
ಬಯಸಿದೊಡೆ ನೋವ ನೀನದನೆ ಪಡೆವೈ ಕೆಳೆಯ
ಬಯಸೆ ನಲಿವನು ನಲಿವೆ ದೊರೆಕೊಳ್ವುದಯ್ಯ
ಲಯವಾಗುವೀ ಕ್ಷಣಿಕ ವಾಂಛೆಗಳ ತೂರಿಬಿಡು
ಬಯಸೊ ಶಾಶ್ವತ ಸುಖವ ಜಾಣಮೂರ್ಖ//
ನಾವು ಬಯಸೋದನ್ನು ಅ ದೇವರು ಕೊಡುವುದೇ ಇಲ್ಲ ಅಂತ ಸುಮ್ಮನೆ ದೂರುವವರನ್ನು ನಾವು ನೋಡುತ್ತೇವೆ. ಆದರೆ ಸ್ವಲ್ಪ ಗಮನವಿಟ್ಟು ನೋಡಿ! ಖಂಡಿತವಾಗಿ ನಾವೇನು ಬಯಸುತ್ತಿದ್ದೇವೆಯೋ ಅದು ನಮಗೆ ಸಿಗುತ್ತಿದೆ. ನೋವ ಬಯಸಿದರೆ ನೋವು ! ನಲಿವ ಬಯಸಿದರೆ ನಲಿವು ! ನೋವೇ ಸಿಗ್ತಾ ಇದೆಯಲ್ಲಾ ಎಂದರೆ ನಾವು ಬಯಸುತ್ತಿರೋದು ಅದೇ ಆಗಿದೆ ಅಷ್ಟೆ! ಕ್ಷಣಿಕ ಭೋಗ ಭಾಗ್ಯಗಳನ್ನು ಬಿಟ್ಟು ಶಾಶ್ವತವಾದುದನ್ನು ಬಯಸಿ , ಲೋಕಸುಖಕೆಳೆಸದಂತೆ ಮನಸ್ಸನ್ನು ಗುರುಚಿತ್ತದಲ್ಲಿ ನಿಲ್ಲಿಸಿದರೆ ಸಿಗಬೇಕಾದುದೇ ಸಿಗುತ್ತದೆ. ಅದು ಆತ್ಮಾನಂತ ! ನಂತರ ಅದೇ ಇಹ ಪರಗಳಿಗೂ ಸಾಧನವಾಗಿ ಮೋಕ್ಷಪ್ರಾಪ್ತಿಯಾಗುತ್ತದೆ. ಇದರಲ್ಲಿ ಸಂದೇಹವೇ ಇಲ್ಲ. ಆದರೆ ಬಯಸೋದಕ್ಕೆ ತಕ್ಕಂತೆ ಬದುಕಿನ ಮೌಲ್ಯಗಳೂ ಇರಬೇಕಲ್ಲವೆ !?
Latest posts by ಶ್ರೀ ಮುರಳೀಧರ ಹೆಚ್ ಆರ್ (see all)
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021