Write to us : Contact.kshana@gmail.com

ಮುಟ್ಟೇಳೊ ದೈವತ್ವ

0
(0)

ಮುಟ್ಟೇಳೊ ದೈವತ್ವ

ಬಿಟ್ಟು ನೋಡೊಳಗಣ್ಣನಟ್ಟಿಬಿಡು ಮನಮೃಗವ
ಕಟ್ಟಿಬಿಡು ಕನವರಿಕೆ ಸುಟ್ಟುರುಹೊ ಕೊಳೆಯ
ಹುಟ್ಟು ಮಾನವ ನೀನು ಕೆಟ್ಟು ಪೋಗದಿರಯ್ಯೊ
ಮುಟ್ಟೇಳೊ ದೈವತ್ವ ಜಾಣಮೂರ್ಖ //

 

ತತ್ರಾಪಿ ಜನ್ಮ ಶತಕೋಟಿಷು ಮಾನುಷತ್ವಂ ಎಂದು ಶ್ರುತಿ ಪುರಾಣಗಳು ಸಾರುತ್ತವೆ.ಮನುಷ್ಯ ಅನೇಕ ಜನ್ಮಗಳನ್ನು ಕಳೆದು ತನ್ನ ಪ್ರಾರಬ್ಧಕರ್ಮಾನುಸಾರ ಬಹಳ ಕಷ್ಟ ಪಟ್ಟು ಸಕೃತ ಫಲದಿಂದ ಈ ಮಾನವ ಜನ್ಮವನ್ನು ಪಡೆದಿದ್ದಾನೆ. ಮಾನವತ್ವದ ಮೂಲಕ ದೈವತ್ವಕ್ಕೆ ಸಾಗಬೇಕು. ಅದಕ್ಕೆ ಬಹಳಷ್ಟು ಅಡ್ಡಿಗಳು. ಮೊದಲನೆಯ ಅಡ್ಡಿಯೇ ನಮ್ಮ ಮನಸ್ಸು , ಈ ಮನಸ್ಸಿಗಂಟಿದ ಮಾಯೆ , ಚಾಂಚಲ್ಯ , ಲೋಲುಪತೆ ಹೀಗೇ ಏನೇನೋ ತುಂಬಾ ಅಡ್ಡಿಗಳು. ಓ ಗೆಳೆಯಾ , ಒಮ್ಮೆ ಒಳಗಣ್ಣ ತೆರೆದು ನೋಡು ! ಮನಮೃಗವನ್ನು ಹೊರಗೆ ಅಟ್ಟಿಬಿಡಯ್ಯಾ ! ಮನದ ಕ್ಷುಲ್ಲಕ ಕನವರಿಕೆಗಳನ್ನು ಕಟ್ಟಿದೂಡಯ್ಯಾ ! ಮನದ ಮಲಿನತೆಯನ್ನು ಸುಟ್ಟು ಬಿಡಯ್ಯ ! ಶುದ್ಧನಾಗಿಬಿಡು, ಇವುಗಳೆಲ್ಲದರ ಹೊಡೆತಕ್ಕೆ ಸಿಕ್ಕಿ ಕೆಟ್ಟು ಹೋಗದಿರಯ್ಯಾ ! ಮಾಡಬೇಕಾದ ಕರ್ತವ್ಯಗಳನ್ನು ಮಾಡು. ಫಲಾಫಲಗಳನ್ನು ಭಗವಂತನಿಗೆ ಬಿಡು. ಯೋಗ್ಯತಾನುಸಾರ ಕೊಡುವುದು ಅವನಿಗೆ ಗೊತ್ತಿದೆ. ಲೋಕ ಕಲ್ಯಾಣವೇ ಬಾಳಿನ ಗುರಿಯಾಗಿರಲಿ. ಎಲ್ಲದರಲ್ಲೂ ಒಳ್ಳೆಯ ಉದ್ದೇಶವಿರಲಿ ಸಾಕು. ವ್ಯಕ್ತಿತ್ವವು ದೈವತ್ವಕ್ಕೇರುವ ಸುಲಭ ಮಾರ್ಗ ಇದೇ ಆಗಿದೆ. ಈ ಮಾರ್ಗವೇ ಇಹಕ್ಕೂ ಪರಕ್ಕೂ ಸಾಧನವು. ಅಲ್ಲವೇ ಗೆಳೆಯರೇ !?

How do you like this post?

Click on a star to rate it!

Average rating 0 / 5. Vote count: 0

No votes so far! Be the first to rate this post.

We are sorry that this post was not useful for you!

Let us improve this post!

Tell us how we can improve this post?

ಶ್ರೀ ಮುರಳೀಧರ ಹೆಚ್ ಆರ್
Latest posts by ಶ್ರೀ ಮುರಳೀಧರ ಹೆಚ್ ಆರ್ (see all)

Subscribe to Blog via Email

Enter your email address to subscribe to this blog and receive notifications of new posts by email.

Join 1 other subscriber
More Stories
ಸದ್ಗುರು