ಕಾಯಮೆಂತಿರ್ದೊಡೇಂ !
ಆಯಾಯರೂಪಿಂದಲಾಯಾಯ ಜೀವಿಗ
ಳ್ಗಾಯಾಯ ತೊಡಕುಗಳ್ಗಂತೆ ಪರಿಹಾರ !
ಕಾಯಮೆಂತಿರ್ದೊಡೇನಾತ್ಮಶುದ್ಧಿಯದಿರಲು
ಕಾಯುವನೊ ಗುರು ದಿಟದಿ ಜಾಣಮೂರ್ಖ//
ಈ ಜಗತ್ತಿನಲ್ಲಿ ಎಲ್ಲವೂ ಏನೋ ಒಂದು ಸೂತ್ರಬದ್ಧವಾಗಿ ನಡೀತಾ ಇದೆ. ಜೀವಿ ಯಾವ ರೂಪಿಂದಲೇ ಇರಲಿ ಅದರದರ ಸಮಸ್ಯೆಗಳಿಗೆ ಏನೋ ಒಂದು ಪರಿಹಾರವಂತೂ ಸಿಕ್ಕೇ ಸಿಗುತ್ತದೆ. ನಾವು ಶುದ್ಧಾತ್ಮರಾಗಿರಬೇಕಷ್ಟೆ ! ನಂಬಿಕೆ ಬೇಕು. ಶರೀರ ಯಾವರೂಪಿಂದ ಇದ್ದರೇನು ? ಆತ್ಮಸಂಸ್ಕಾರ ಮುಖ್ಯ ! ಜಗತ್ತಿನ ಅತ್ಯಂತ ಬುದ್ಧಿಜೀವಿಯಾದ ಮನುಷ್ಯ ಮೃಗಗಳಿಗಿಂತಲೂ ಕಡೆಯಾಗಿ ವರ್ತಿಸುವುದಿಲ್ಲವೇ !? ಆತ್ಮಶುದ್ಧಿಯಿದ್ದರೆ , ನಂಬಿಕೆಯಿದ್ದರೆ ಗುರುನಾಥನು ಬಿಡದೆ ಕಾಪಾಡುವನು ಇದರಲ್ಲಿ ಸಂದೇಹವೇ ಇಲ್ಲ. ಅಲ್ಲವೇ ಗೆಳೆಯರೇ !?
Latest posts by ಶ್ರೀ ಮುರಳೀಧರ ಹೆಚ್ ಆರ್ (see all)
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021