Write to us : Contact.kshana@gmail.com
0
(0)

ಬಡವಾದಿಬಲ್ಲಿದರು ಸಂತಾದಿ ಶರಣರಿಗು
ದುಡಿವವಗು ಮಡಿವವಗು ನೆಮ್ಮದಿಯ ಚಿಂತೆ
ಒಡನೆ ಸಿಗುವುದೆ ಬಯಸೆ ಶಾಂತಿಸಿರಿಯೆಲ್ಲರ್ಗೆ
ಕಡಿಯದಲೆ ಬಂಧನವ ಜಾಣಮೂರ್ಖ //

ಒಮ್ಮೆ ಈ ಪ್ರಪಂಚವನ್ನು ಹಾಗೇ ಗಮನಿಸಿ. ಎಲ್ಲರಿಗೂ ಶಾಂತಿ ಬೇಕು, ಎಲ್ಲರಿಗೂ ನೆಮ್ಮದಿ ಬೇಕು. ಬಡವರಾಗಲಿ , ಶ್ರೀಮಂತರಾಗಲಿ , ಸಂತರು , ಶರಣರು , ದುಡಿವವರು ವಿಪರ್ಯಾಸವೆಂದರೆ ಆಗಲೋ ಈಗಲೋ ಮರಣ ಹೊಂದೋರಿಗೂ ಕೂಡ ನೆಮ್ಮದಿಯ ಚಿಂತೆ. ಬಯಸಿದಾಕ್ಷಣ ಎಲ್ಲರಿಗೂ ಸಿಗುವಂತಹುದೇನು ನೆಮ್ಮದಿ! ಶಾಂತಿಸಿರಿ ! ಅದಕ್ಕೆ ಬಂಧನಗಳಿಂದ ಬಿಡುಗಡೆ ಹೊಂದಬೇಕು. ಎಲ್ಲಿಯವರೆಗೂ ನಾನು , ನನ್ನದೆಂಬ ಬಂಧನ ವ್ಯಾಮೋಹಾದಿಗಳು ನಮ್ಮನ್ನು ಬಂಧಿಸಿರುತ್ತವೋ ಅಲ್ಲಿಯವರೆಗೂ ನೆಮ್ಮದಿ ಮರೀಚಿಕೆಯೇ ಸರಿ ! ಎಲ್ಲವೂ ಕ್ಷಣಿಕವೆಂಬ ಭಾವ ಮನದಲ್ಲಿ ನೆಲೆಗೊಂಡಾಗ ಶಾಂತಿಸಿರಿ ನಮ್ಮದೇ ಸರಿ ! ಅಲ್ಲಿಯೂ ಇದು ನನ್ನದು ಎಂದರೆ ಆ ಶಾಂತಿಸಿರಿ ನಮ್ಮಿಂದ ದೂರವೇ! ಕೆಲವರನ್ನು ನೋಡಿ ತುಂಬಾ ಶ್ರೀಮಂತರು ! ಯಾವುದಕ್ಕೂ ಕೊರತೆಯಿರದು ! ನಮಗೆ ಯಾವುದಕ್ಕೂ ಕೊರತೆಯಿಲ್ಲ ಎಂಬ ಭಾವವೇ ಅವರ ನೆಮ್ಮದಿಯ ಅಭಾವಕ್ಕೆ ಕಾರಣವಾಗಿರುತ್ತೆ ! ಅಲ್ಲವೇ ಗೆಳೆಯರೇ !?

How do you like this post?

Click on a star to rate it!

Average rating 0 / 5. Vote count: 0

No votes so far! Be the first to rate this post.

We are sorry that this post was not useful for you!

Let us improve this post!

Tell us how we can improve this post?

ಶ್ರೀ ಮುರಳೀಧರ ಹೆಚ್ ಆರ್
Latest posts by ಶ್ರೀ ಮುರಳೀಧರ ಹೆಚ್ ಆರ್ (see all)

Subscribe to Blog via Email

Enter your email address to subscribe to this blog and receive notifications of new posts by email.

Join 1 other subscriber
More Stories
ಸಂಕಲ್ಪ