Write to us : Contact.kshana@gmail.com

ಚಣಚಣದ ಕರ್ಮ ದೇವನ ಪೂಜೆ

0
(0)

ಮನದಹಮ ಕಳೆದು ಕರ್ಮವನೆಸಗು ಬಾಳಿನೊಳು
ನನದೆನದೆ ನಿನದೆನ್ನು ಸೇವೆ ಗುರಿಯಲ್ತೆ !?
ಚಣಚಣದ ಕರ್ಮ ದೇವನ ಪೂಜೆ ಭಾವದೊಳು
ಘನಭಾಗ್ಯವೆಂದು ಸಾರ್ ಜಾಣಮೂರ್ಖ //

ಓ ಗೆಳೆಯ , ಈ ಬದುಕಲ್ಲಿ ನಾನೆಂಬ ಅಹಂಕಾರವನ್ನು ಕಳೆಯಬೇಕಾದರೆ ಗೈವ ಪ್ರತಿಯೊಂದು ಕಾರ್ಯವೂ ನಿನ್ನದಯ್ಯಾ ಎಂಬ ಸಮರ್ಪಣಾ ಭಾವವಿರಲಿ !ನಿಸ್ವಾರ್ಥ ಸೇವೆ ಬಾಳಿನ ಗುರಿಯಾಗಿರಲಿ ! ಕ್ಷಣಕ್ಷಣದ ನಮ್ಮ ಕಾರ್ಯಗಳೆಲ್ಲವೂ ಭಗವದಾರಾಧನೆಯೆಂಬ ಭಾವದಲ್ಲೇ ನಡೆಯಲಿ ! ಇದು ನಮ್ಮ ಜೀವನದಲ್ಲಿ ಭಗವಂತನು ನೀಡಿರುವ ಭಾಗ್ಯ ಎಂಬ ಭಾವದಲ್ಲಿ ಕರ್ಮವೆಸಗಬೇಕು. ಇದರಿಂದ ಅಹಂಕಾರ ಮಮಕಾರಗಳು ಕಳೆದು ಮನಸ್ಸು ಪರಿಶುದ್ಧವಾಗುತ್ತದೆ. ಸಾಕ್ಷಾತ್ ಭಗವಂತನೇ ಕರ್ಮದಲ್ಲಿ ಮಗ್ನನಾಗಿದ್ದಾನೆಂದ ಮೇಲೆ ನಮ್ಮದ್ಯಾವ ಲೆಕ್ಕ !? ಅಂದ ಹಾಗೆ ಈ ಸೃಷ್ಟಿಯನ್ನು ಹಾಗೇ ಗಮನಿಸಿ ! ಒಂದು ಕ್ಷಣವೂ ಸುಮ್ಮನಿಲ್ಲ ! ಅಲ್ಲವೇ ! ಹಾಗೇ ನಾವೂ ಸಹ ಸದ್ಧರ್ಮ , ಸತ್ಕಾರ್ಯ , ಸಚ್ಚಿಂತನೆಗಳಲ್ಲಿ ಬದುಕನ್ನು ಸಾರ್ಥಕವಾಗಿ ಕಳೆಯಬೇಕು. ಅಲ್ಲವೇ ಗೆಳೆಯರೇ ?!

How do you like this post?

Click on a star to rate it!

Average rating 0 / 5. Vote count: 0

No votes so far! Be the first to rate this post.

We are sorry that this post was not useful for you!

Let us improve this post!

Tell us how we can improve this post?

ಶ್ರೀ ಮುರಳೀಧರ ಹೆಚ್ ಆರ್
Latest posts by ಶ್ರೀ ಮುರಳೀಧರ ಹೆಚ್ ಆರ್ (see all)

Subscribe to Blog via Email

Enter your email address to subscribe to this blog and receive notifications of new posts by email.

Join 1 other subscriber
More Stories
ದೇವನೆಡೆ