ಆ ಪುಟ್ಟ ಹುಡುಗನ ಪುಟ್ಟ ಕಣ್ಣುಗಳು ಉರಿಯುತ್ತಿದ್ದವು ಕಣ್ಣಿನಲ್ಲಿ ಧಾರಾಕಾರ ನೀರು! ನೋಡಿದವರಿಗೆ ಸ್ಪಷ್ಟವಾಗಿ ತಿಳಿಯುತಿತ್ತು ಆತ ಅಳುತಿದ್ದಾನೆ ಅನ್ನುವುದು. ಆದರೆ ಆ ಹುಡುಗನ ಅಳು ಅಳುವೇ ಆಗಿರಲಿಲ್ಲ ಅಸಲಿಗೆ ಅಳಲು ಅವನಿಗೆ ಕಾರಣವೇ ಇರಲಿಲ್ಲ. ಹೋಗಿದ್ದು ಗೆಳೆಯರೊಂದಿಗೆ ಕ್ರಿಕೆಟ್ ಆಡಲು. ಪ್ರತಿ ಸಲ ಸೋಲುವ,ಹೆಚ್ಚು ಸ್ಕೋರ್ ಮಾಡದ ಆ ಹುಡುಗನನ್ನು ಅವನದೇ ಆಪ್ತ ಗೆಳೆಯರು ಆ ದಿನ ಅವನನ್ನು ಲೇವಡಿ ಮಾಡಿ ನಕ್ಕಿದ್ದರು. ಇದೇ ಅವನ ಅಳುವಿಗೆ ಕಾರಣವಾಗಿತ್ತು.
ಹೀಗೆ ಅಳುತ್ತಿರುವ,ದುಃಖಿಸುತ್ತಿರುವ ಹುಡುಗ ಸ್ವಭಾವತಃ ತೀರ ಅಳುಮುಂಜಿಯೇನಲ್ಲ ಅವನ ಕಂಬನಿಗೆ ಕಾರಣ ನಾನು ಸೋತಿದ್ದೇನೆಂಬ ಹತಾಶೆಯೇ ಭಾವನೆಯೇ ಕಾರಣವಾಗಿತ್ತು! ಕಣ್ಣೀರು ಕರಗಿ ಸುರಿದಷ್ಟು ಹೊತ್ತು ಅವನ ಕಣ್ಣಲ್ಲಿ ಗೆಲ್ಲಬೇಕೆಂಬ ಹಠ ಹೆಪ್ಪುಗಟ್ಟುತಿತ್ತು!
ಹೀಗೆ ಹುಟ್ಟುವ ಹಠ ಮನದೊಳಗೆ ಆತನ ನಂತರದ ಮ್ಯಾಚಿನ ಗೆಲುವಿಗೆ ಅರಿವಿಲ್ಲದೇ ಮುನ್ನುಡಿ ಬರೆಯುತ್ತಿತ್ತು.
ಇದು ಬರೀ ಆ ಪುಟ್ಟ ಹುಡುಗನೊಬ್ಬನ ಕತೆಯಲ್ಲ!
ಇಂತಹದೇ ಹತ್ತು ಹಲವು ಸಂದರ್ಭಗಳನ್ನು ನಾವು, ನೀವು ಎಲ್ಲರೂ ಯಾವತ್ತೋ ಒಂದುದಿನ ಎದುರಿಸಿರಿಸಿಯೇ ಇರುತ್ತೇವೆ. ಹತಾಶೆ ಹುಟ್ಟಿಸುವ ಹಠ ನಮ್ಮನ್ನು ಗೆಲ್ಲಲು ಪ್ರತಿಸಲವೂ ಪ್ರೇರೇಪಿಸುತ್ತದೆ. ಯಾರದೋ ಲೇವಡಿಗೆ ನಾವು ಸೋತಿದ್ದೇವೆಂದುಕೊಂಡ ಪ್ರತಿ ಕ್ಷಣವೂ ನಾವು ಗೆಲುವಿಗೆ ಹಾತೊರೆಯುತಲೇ ಇರುತ್ತೇವೆ. ಈ ಗೆಲುವು ಎನ್ನುವುದು ಬಹಳ ಕಷ್ಟದ್ದೇನೆಲ್ಲ ಅಥವಾ ನಮ್ಮ ಗುರಿ ಬಹಳ ದೊಡ್ಡದ್ದೇ ಆಗಿರಬೇಕೆಂದೇನಿಲ್ಲ .
ಗುಂಪಿನೊಡನೆ ಇದ್ದಾಗ ಯಾರಿಂದಲೋ ಹೇಳಿಸಿಕೊಂಡಿರುತ್ತೇವೆ ಅಥವಾ ಕೇಳಿರುತ್ತೇವೆ “ಇದು ನಿನ್ನಿಂದಾಗದ ಕೆಲಸ ” ಅನ್ನವುದು. ಆಗ ನಮಗೆ ಗೊತ್ತಿಲ್ಲದೇ ಸುಪ್ತ ಮನಸಿಲ್ಲೊಂದು ಆಲೋಚನೆ ಹುಟ್ಪುತ್ತದೆ. “ಇದು ನನ್ನಿಂದೇಕೆ ಸಾಧ್ಯವಿಲ್ಲ”? ಅನ್ನುವುದು. ಇಂತಹ ಪ್ರಶ್ಣೆಗಳು ನಮ್ಮ ಮತ್ತಷ್ಟು ಚನ್ನಾಗಿ ಬದುಕಲು ಪ್ರೇರೇಪಿಸುತ್ತದೆ. ನಮ್ಮಲ್ಲಿ ಹಲವಾರು ಸಾಧಕರ ಬದುಕಿನ ಶ್ರೇಷ್ಟ ಕತೆಗಳಿವೆ. ಆ ಕತೆಗಳ ಹಿಂದೆಲ್ಲಾ ನೂರಾರು ಅವಮಾನಗಳ,ನೋವುಗಳ ಹಲವಾರು ಸಾಲುಗಳಿವೆ. ಅಂತವರೆಲ್ಲಾ ನಮಗೆ ಇಂತಹ ಸಂದರ್ಭದಲ್ಲಿ ಮಾದರಿಯಾಗುತ್ತಾರೆ.
ಆದ್ದರಿಂದ ನಾವುಗಳ ಏನೂ ಸಾಧಿಸಲಿಲ್ಲ ಎಂಬ ಕೊರಗಿನಲಿ ಕಂಬನಿ ಸುರಿಸುವುದಕ್ಕಿಂತ,ಆಗ ಕಣ್ಣಿನಲಿ ಹಠ,ಛಲಗಳಲ್ಲಿ ತುಂಬಿಕೊಳ್ಳೋಣ ಏನಾದರೂ ಸಾಧಿಸಲು ಯತ್ನಿಸೋಣ.
ಮಂಜು
- ಕಳೆದುಕೊಂಡಿದ್ದು ಇಲ್ಲೇ… - June 4, 2020
- ಪುಟ್ಟ ಕತೆಗಳು… - June 3, 2020
- ಮರೆಯಾದ ಮಾಣಿಕ್ಯ…. - June 2, 2020